ನನ್ನ ಮಕ್ಕಳು

ಇವರು ನಮ್ಮ ಮಕ್ಕಳು ನೋಡಿ
ಮನೆತುಂಬಾ ಕೈಯಿಟ್ಟಲ್ಲಿ ಕಾಲಿಟ್ಟಲ್ಲಿ
ಲಲ್ಲೆಗರೆವ ಮಕ್ಕಳು
ಬರೀ ಕೈಹಿಡಿದರೆ ಸಾಲದು
ಎದೆಗಪ್ಪಿಕೋ ಎನ್ನುತ್ತವೆ-ಅಷ್ಟು ಮಾಡಿದರೆ
ಅಲ್ಲಿಂದ ತಲೆ ಮೇಲೆತ್ತಿಕೋ ಎನ್ನುತ್ತವೆ

ಕೆಲವು ಗುಲಾಬಿ, ಸೇಬುಗಳಂತೆ
ಕಂಡವರ ಕಣ್ಣು ಸೆಳೆಯುತ್ತವೆ
ಕೆಲವು ಸುಲಿದ ಬಾಳೆಹಣ್ಣಿನಂತೆ
ಒಲಿವ ಹೆಣ್ಣಿನಂತೆ ಮನವನಪ್ಪುತ್ತವೆ
ಕೆಲವು ರೊಚ್ಚೆ ಹಿಡಿದು ಕಿಚಕಿಚ ತಲೆತಿನ್ನುತ್ತವೆ
ಕೆಲವೆಲ್ಲರ ಕೈಲಾಡುವ ಚೆಂಡುಗಳಂತುಂಡಾಡಿಗಳು
ಆಡಿ ಆಡಿ ಮೈ ಕೈ ತರಚಿಕೊಂಡು
ಚಿಂದಿ ಮಂದಾಗಿ ಮೂಲೆ ಹಿಡಿಯುವವು
ಚಿಕಿತ್ಸೆಗೆ ಮೈತೆರೆದುಕೊಂಡು
ಕೆಲವು ಮಹಾರಾಜ-ರಾಣಿಯರ ಜರ್ಬಿನಿಂದ
ಎಲ್ಲರ ಕಣ್ಣು ಮುಜರೆಗಳಿಂದ ಬೀಗುತ್ತ
ಯಾರ ಕೈಗೂ ನಿಲಕದಷ್ಟೆತ್ತರ
ಸಿಂಹಾಸನದಲ್ಲಾಸೀನವಾಗುತ್ತವೆ

ಇವರನ್ನೆಲ್ಲಾ ನಾನೇ ಹಡೆದಿರುವೆನೆಂದೀರಿ ಮತ್ತೆ
ಕುಟುಂಬ ಯೋಜನೆಯಲ್ಲಾದೇನು ಕತ್ತೆ
ಎಲ್ಲೆಲ್ಲೋ ಹುಟ್ಟಿ ಬಂದು ಬಿದ್ದಿವೆ ನನ್ನ ಮಡಿಲಲ್ಲಿ
ನಾನು ಜತನವಾಗಿ ಸಾಕುವ ಮಕ್ಕಳಿವರು
ಯಾರವಾದರೇನು ನನ್ನ ಕರುಳಿಗಂಟಿ
ರಕ್ತ ಕಣ ಕಣಗಳಾಗಿ ಬೆರೆತು ಹೋಗಿವೆ
ಇವರು ಬೇರೆಯವರಲ್ಲಿ ದುಡಿದು ಬಂದು
ಸೋತು ಮುಖ ಬಾಡಿಸಿಕೊಂಡು ಕೂತಾಗ
ಕಂಡ ನನ್ನ ಕಣ್ಣು ಕೆಂಡವಾಗುತ್ತವೆ
ಮೈತಟ್ಟಿ ಮೂಕವಾಗಿ ರೋದಿಸಿ
ಕಟುಕ ಕರುಳುಗಳನ್ನು ಬೈದುಕೊಂಡು
ಸಮಾಧಾನ ಮಾಡಿಕೊಳ್ಳುತ್ತೇನೆ
ಅವುಗಳು ಮಾಡುವ ಮೌನಾರೋಪಣೆಗಳನ್ನು ಕೇಳಿ ಸುಮ್ಮನೆ
ಸಾಧ್ಯವಾದಷ್ಟು ಬೆಚ್ಚಗೆ ತಟ್ಟಿ ಮಲಗಿಸುತ್ತೇನೆ
(೩-೭-೭೫)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೇಮ
Next post ಸೂರ್ಯ ದೇವರೇ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

cheap jordans|wholesale air max|wholesale jordans|wholesale jewelry|wholesale jerseys